Tuesday, November 18, 2008

ಚಿಗುರು


ಚಿಗುರು ಬೆಳೆದಿದೆ, ಬಾಳೆಂಬ ಮರದಲಿ,
ಕವಲು ಒಡೆದಿದೆ, ಒಲುಮೆ ಎಂಬ ನದಿಯಲಿ,
ಮನಸ್ಸು ಮುಳುಗಿದೆ, ವಿರಹ ಎಂಬ ಸುಳಿಯಲಿ....

ಈ ಮರಕೆ ಬೇಕು ಬೇರಿನಾಸೆರೆ,
ಈ ಮನಕೆ ಬೇಕು ಒಲವಿನಾಸರೆ,
ಈ ಕಣ್ಣಿಗೆ ಬೇಕು ನಿನ್ನ ಮುಗುಳ್ನಗೆಯಾಸರೆ,
ಈ ಕವಿಗೆ ಬೇಕು ನಿನ್ನ ಸ್ಪೂರ್ತಿಯಾಸರೆ .

ಬಾಳೆಂಬ ಪಥದಲಿ, ಮುಳ್ಳಿದ್ದರೇನು ,
ಪ್ರೇಮ ಯಾತ್ರೆಯಲಿ, ವಿರಹ ಬಂದರೇನು,
ದಾರಿ ಕಾಣುತಿದೆ ನನ್ನ ನಲ್ಲೆಯ ಕಡೆಗೆ,
ಕಾಲ ಸನಿಹವಾಗಿದೆ ಈ ವೇದನೆಗಳ ಅಂತ್ಯಕ್ಕೆ...........